September 16, 2024

Vijayanagara Express

Kannada News Portal

ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

1 min read

ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಹರಪನಹಳ್ಳಿ: ರಾಜ್ಯದಲ್ಲಿ ರಾಜ್ಯಸಭೆ ಯ 4ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 3 ಸ್ಥಾನ ಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಕ್ಷದ ಕಾರ್ಯಕರ್ತರು  ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ ಯವರ ನೇತೃತ್ವದಲ್ಲಿ  ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು .

ಈ ವೇಳೆ ಮಾತನಾಡಿದ ಬಿಜೆಪಿ ತಾಲೂಕು ಮುಖಂಡ ಆರ್ ಲೋಕೇಶ್ ಮಾತನಾಡಿ ರಾಜ್ಯ ಸಭಾ ಸದಸ್ಯ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಜನಪರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

ನಿರ್ಮಲಾ ಸೀತಾರಾಮ ನ್ ಜಗ್ಗೇಶ್,ಲೇಹರ್ ಸಿಂಗ್ ಈ ಮೂವರ ಗೆಲುವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಮೂಲೆಗುಂಪು ಮಾಡಿದಂತಾಗಿದೆ ಆದ್ದರಿಂದ ಇಂದು ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿದ್ದ ವರಿಗೆ ಮುಖಭಂಗವಾಗಿದಂತಾಗಿದೆ ಹಾಗೂ ಮೂಲೆಗುಂಪಾಗಿವೆ ಎಂದು ಹೇಳಿದರು.

ನೀಲಗುಂದದ ತಳವಾರ ಮನೋಜ್ ಮಾತನಾಡಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ ಇದಕ್ಕೆ ಕಾರಣ ಬಿಜೆಪಿ ಸರ್ಕಾರದ ಉತ್ತಮವಾದ ಜನಪ್ರಿಯ ಯೋಜನೆಗಳೆ ಆಗಿದೆ ಹರಪನಹಳ್ಳಿ ತಾಲೂಕು ಬಿಜೆಪಿ ಮುಖಂಡರು ಈ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಇದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಬಹುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ, ಪೂರ್ಯ ನಾಯ್ಕ್ ಮಂಡಲ ಕಾರ್ಯದರ್ಶಿ,ಗಂಗಾನಾಯ್ಕ್ ಉದ್ಗಟ್ಟಿ ಸಣ್ಣ ತಾಂಡ,ರಾಜಪ್ಪ ಡಿ ನಂದೀಬೇವೂರು,ಮ್ಯಾಕಿ ದುರುಗಪ್ಪ,ಗೌರಿಹಳ್ಳಿ ಬಸವರಾಜ್,ಬಾಗಳಿ ಸಾಹುಕಾರ ಮಂಜುನಾಥ್,ಮತ್ತಿಹಳ್ಳಿ ಪ್ರಕಾಶ್,ಮಾಚಿಹಳ್ಳಿ ಮಲ್ಲೇಶ್ ನಾಯ್ಕ್, ಕೊಟ್ರೇಶ್ ಗೌಳಿ,ಅಣ್ಣಪ್ಪ, ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *