Vijayanagara Express

Kannada News Portal

ಇದೊಂದು ರೈತ ವಿರೋಧಿ ಬಜೆಟ್‌ – ಬಿಜೆಪಿ ಮುಖಂಡ ಮೂಲಿಮನಿ ಹನುಮಂತಪ್ಪ

1 min read

ಇದೊಂದು ರೈತ ವಿರೋಧಿ ಬಜೆಟ್‌ – ಬಿಜೆಪಿ ಮುಖಂಡ ಮೂಲಿಮನಿ ಹನುಮಂತಪ್ಪ

ಹರಪನಹಳ್ಳಿ : ಫ್ರೆ – 16,  ಮುಖ್ಯಮಂತ್ರಿ ಸಿದ್ದರಾಮಯ್ಯ ನವರು  ಮಂಡಿಸಿರುವ  ಬಜೆಟ್ ನ್ನು ಇದೊಂದು  ದೂರದೃಷ್ಟಿಯಿಲ್ಲದ ರೈತ ವಿರೋಧಿ ಬಜೆಟ್‌  ಇದಾಗಿದೆ ಎಂದು   ಬಿಜೆಪಿ ಮುಖಂಡರಾದ ಮೂಲಿಮನಿ ಹನುಮಂತಪ್ಪ ರವರು ಟೀಕಿಸಿದ್ದಾರೆ  .

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ತಮ್ಮ ಹದಿನೈದನೇ ಮತ್ತು ಈ ಅವಧಿಯಲ್ಲಿಯ ಎರಡನೆ ಬಜೆಟ್ ಅನ್ನು ಮಂಡಿಸಿದ್ದು ಇದು ದೂರದೃಷ್ಟಿಯಿಲ್ಲದ ಬಜೆಟ್‌ ಇದಾಗಿದೆ’ ಎಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲುವಾಗಲು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿ ಮೂಲಿಮನಿ ಹನುಮಂತಪ್ಪ ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಜೆಟ್‌ ಬಿಸಿಲು ಕುದುರೆಯಿದ್ದಂತೆ ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಥವಿಲ್ಲದ ಬಜೆಟ್ ಅನ್ನು ಮಂಡಿಸಿದ್ದಾರೆ ಮತ್ತು ಕಳೆದ ಬಜೆಟ್ ಗಿಂತಲೂ ಕಳಪೆ ಬಜೆಟ್ ನ್ನು ಮಂಡಿಸಿದ್ದಾರೆ ಇದು ರೈತರು, ಕಾರ್ಮಿಕ ವರ್ಗ, ಬಡವರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸುವ ಧ್ವನಿಯಿಲ್ಲದವರ ಬಜೆಟ್ ಇದಾಗಿದೆ .

ಈ ಬಜೆಟ್ ನಲ್ಲಿ ಯಾವುದೇ ಭರವಸೆಗಳಿಲ್ಲ ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದಷ್ಟೇ ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು’ ಎಂದು ಲೇವಡಿ ಮಾಡಿದ್ದಾರೆ .

ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆ ಏರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ ಉತ್ತರ ಕರ್ನಾಟಕಕ್ಕೆ ಈ ಬಜೆಟ್ ನಲ್ಲಿ ಯಾವುದೇ ಪ್ಯಾಕೇಜ್ ಅನ್ನು ಘೋಷಿಸಿಲ್ಲ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ ನೀರಾವರಿ ವ್ಯವಸ್ಥೆಗೆ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಂಡಿಲ್ಲ ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಿಸುತ್ತೇವೆಂದು ಅವರ ಪ್ರಣಾಳಿಕೆಯಲ್ಲಿ ತಿಳಿಸಿದ್ದರು ಬಹುಶಃ ಇದನ್ನು ಮರೆತಿದ್ದಾರೆ ಎಂದೆನಿಸುತ್ತದೆ ಒಟ್ಟಾರೆಯಾಗಿ ಕಾಂಗ್ರೆಸ್ ಚುನಾವಣಾ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದ ಪ್ರಣಾಳಿಕೆಯನ್ನು ಮರತಂತಿದೆ ಕೇವಲ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ಬಜೆಟ್ ತುಂಬಾ ಅದರ ಬಗ್ಗೆ ಭಾಷಣ ಬಿಡುವುದಾಗಿದೆ ಆ ಮೂಲಕ ಲೋಕಸಭಾ ಚುನಾವಣೆಗೆ ಜನರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಅಷ್ಟೇ ಎಂದು ಮೂಲಿಮನಿ ಹನುಮಂತಪ್ಪ ಈ ಬಾರಿಯ ಬಜೆಟ್ ನ್ನು ಟೀಕಿಸಿದ್ದಾರೆ .

 

Leave a Reply

Your email address will not be published. Required fields are marked *