Vijayanagara Express

Kannada News Portal

ನೂತನ ರಾಷ್ಟ್ರಪತಿಗಳ ಭಾವಚಿತ್ರವನ್ನು ಶಾಸಕ ಕರುಣಾಕರ ರೆಡ್ಡಿ ಯವರು ತಮ್ಮ ನಿವಾಸದಲ್ಲಿ ಅನಾವರಣಗೊಳಿಸಿದರು

1 min read

 

 

ನೂತನ ರಾಷ್ಟ್ರಪತಿಗಳ ಭಾವಚಿತ್ರವನ್ನು ಶಾಸಕ ಕರುಣಾಕರ ರೆಡ್ಡಿ ಯವರು ತಮ್ಮ ನಿವಾಸದಲ್ಲಿ ಅನಾವರಣಗೊಳಿಸಿದರು

 

ಹರಪನಹಳ್ಳಿ: ಭಾರತದ ನೂತನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರ ಭಾವಚಿತ್ರವನ್ನು ಶಾಸಕ ಗಾಲಿ ಕರುಣಾಕರ ರೆಡ್ಡಿ ರವರು ತಮ್ಮ ಬಿಜೆಪಿ ಕಚೇರಿ ಮತ್ತು ನಿವಾಸದಲ್ಲಿ ಮಂಗಳವಾರ ಭಾವಚಿತ್ರವನ್ನು ಅನಾವರಣಗೊಳಿಸಿದರು.

ಪಟ್ಟಣದ ಬಿಜೆಪಿ ಕಚೇರಿ ಮತ್ತು ಶಾಸಕರ ನಿವಾಸದಲ್ಲಿ ನೂತನವಾಗಿ ಆಯ್ಕೆಯಾದ ರಾಷ್ಟ್ರಪತಿಗಳ ಭಾವಚಿತ್ರವನ್ನು ಕಚೇರಿಯಲ್ಲಿ ಅನಾವರಣಗೊಳಿಸಿ ಮಾತನಾಡಿದ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಬಿಜೆಪಿ ಪಕ್ಷವು ಪಕ್ಷಕ್ಕಾಗಿ ದುಡಿದವರಿಗೆ ಮಾನ್ಯತೆಯನ್ನು ನೀಡುತ್ತದೆ ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ ಎಂಬುದಕ್ಕೆ ಒರಿಸ್ಸಾದ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರವರೇ ಸಾಕ್ಷಿಯಾಗಿದ್ದಾರೆ ಎಂದರು .

ಪಕ್ಷವು ಇವರನ್ನು ಗುರುತಿಸಿ ಇವರ ಸೇವೆಗೆ ಮಾನ್ಯತೆಯನ್ನು ನೀಡಿ ಇವರ ಸೇವೆಯನ್ನು ಗೌರವಿಸಿ ಇಂದು ರಾಷ್ಟ್ರದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿಸಿ ಅವರನ್ನು ಗೆಲ್ಲಿಸಿರುವುದಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ, ತುಳಿತಕ್ಕೊಳಗಾದ ಸಮುದಾಯದವರಿಗೂ , ಶೋಷಿತ ಸಮುದಾಯಗಳಿಗೂ,ಬಿಜೆಪಿ ಎಂತವರಿಗೂ ಸಹ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂಬುದಕ್ಕೆ ಭಾರತೀಯ ಜನತಾ ಪಕ್ಷವೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಆರ್ ಲೋಕೇಶ್, ರೊಕ್ಕಪ್ಪ, ಮಲ್ಲೇಶ್ ,ಯುಪಿ ನಾಗರಾಜ್ ,ತಳವಾರ್ ಮನೋಜ್ ,ಅನಂತನಹಳ್ಳಿ ಅಣ್ಣಪ್ಪ ,ಹರಿಯಮ್ಮನಹಳ್ಳಿ ಮಂಜುನಾಥ್, ಬಾಗಳಿ ಕೊಟ್ರೇಶಪ್ಪ, ಮಹೇಶ್, ದಾದಾಪುರದ ಶಿವಾನಂದ, ಮಂಜುನಾಥ್ ಗುಂಡಿ ,ಕೆಂಗಳ್ಳಿ ಪ್ರಕಾಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *