ಹರಪನಹಳ್ಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬೇಲ್ದಾರ್ ಭಾಷಾ
1 min readಹರಪನಹಳ್ಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬೇಲ್ದಾರ್ ಭಾಷಾ
ಹರಪನಹಳ್ಳಿ: ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು
ಬೇಲ್ದಾರ್ ಭಾಷಾ ಸಾಹೇಬ್ ರವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಪಟ್ಟಣದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾದ ಬೇಲ್ದಾರ್ ಭಾಷಾ ರವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ಕಳೆದ ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ ನಾನು ತಾಲೂಕಿನ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಭಾಂದವ್ಯವನ್ನು, ಒಡನಾಟವನ್ನು ಹೊಂದಿದ್ದೇನೆ ಈ ಬಾರಿ ನಮ್ಮ ತಾಲೂಕಿನ ಜನರು ಸ್ಥಳೀಯ ಅಭ್ಯರ್ಥಿ ಗಳು ಶಾಸಕರಾಗಬೇಕು ಎಂಬ ಧ್ವನಿಯನ್ನು ಎತ್ತಿದ್ದಾರೆ ಹಾಗಾಗಿ ನಾನು ಈ ಬಾರಿ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದರು.
ಈಗಾಗಲೇ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದು ಅದರಂತೆ ನಾನು ಜೆಡಿಎಸ್ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಲು ತೀರ್ಮಾನಿಸಿದ್ದೇನೆ ಎಂದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸಿ ಎಂ ಇಬ್ರಾಹಿಂ ರನ್ನು ಭೇಟಿ ಮಾಡಿದ್ದೇನೆ ಇದೇ ಸೋಮವಾರ ಬರಲು ತಿಳಿಸಿದ್ದಾರೆ ಹೆಚ್ ಡಿ ಕುಮಾರಸ್ವಾಮಿಯವರು ಮತ್ತು ಸಿ.ಎಂ.ಇಬ್ರಾಹಿಂ ರವರು ಜೆಡಿಎಸ್ ನ ಸ್ಥಳೀಯ ನಾಯಕತ್ವಕ್ಕಾಗಿ ಅಭ್ಯರ್ಥಿ ಗೆ ಹುಡುಕಾಟ ಮಾಡುತ್ತಿದ್ದರು ನಾನು ರೈತನ ಮಗನಾಗಿ ಬೆಳೆದು ಬಂದಿದ್ದೇನೆ ಇಂದು ಚುನಾವಣೆ ಅಖಾಡಕ್ಕೆ ಇಳಿದಿದ್ದೇನೆ .
ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ನಾನು ಸ್ಥಳೀಯವಾಗಿ ಇದ್ದುಕೊಂಡು ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು .