ಹಾವು ಕಚ್ಚಿ ಬಾಲಕ ಸಾವು
1 min readಹಾವು ಕಚ್ಚಿ ಬಾಲಕ ಸಾವು
ಹರಪನಹಳ್ಳಿ: ಡಿ – 7 , ಪಟ್ಟಣದ ಹೊರವಲಯದಲ್ಲಿರುವ ಹೊಲಕ್ಕೆ ಬುತ್ತಿ ಕೊಡಲು ಹೋಗಿ ಹಾವು ಕಚ್ಚಿ ಬಾಲಕ ಬಾಣದ ರಮೇಶ ತಂದೆ ಬಾಣದ ಹಾಲೇಶಪ್ಪ (16) ಮೃತ ದುರ್ದೈವಿಯಾಗಿರುತ್ತಾನೆ.
ಮೃತ ಬಾಣದ ರಮೇಶ್ ನು ಹಿರೇಹಡಗಲಿ ಗ್ರಾಮದವನಾಗಿದ್ದು ಈತನ ತಾಯಿ ತವರುಮನೆ ಹರಪನಹಳ್ಳಿ ತಾಲೂಕಿನ ಅಲಮರಸಿಕೇರಿ ಗ್ರಾಮವಾಗಿರುತ್ತದೆ ಈತನ ಚಿಕ್ಕಮ್ಮಳನ್ನು ನೋಡಲು ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿದ ಸಂದರ್ಭದಲ್ಲಿ ಹೊಲಕ್ಕೆ ಬುತ್ತಿ ಕೊಡಲು ಹೋಗಿರುತ್ತಾನೆ ಆಗ ವಿಷಜಂತು ಕಚ್ಚಿ ಬಾಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ .
ಈ ಸಂಬಂಧ ಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.