Vijayanagara Express

Kannada News Portal

ಹಗರಿಬೊಮ್ಮನಹಳ್ಳಿ ಯಲ್ಲಿ AIKS ಕಾರ್ಯಕರ್ತರ ಸಂಘಟನಾ ಸಭೆ

1 min read

ಹಗರಿಬೊಮ್ಮನಹಳ್ಳಿಯಲ್ಲಿ AIKS ಕಾರ್ಯಕರ್ತರ ಸಂಘಟನಾ ಸಭೆ.
ಹಗರಿಬೊಮ್ಮನಹಳ್ಳಿ : ಹಗರಿಬೊಮ್ಮನಹಳ್ಳಿ ಯಲ್ಲಿ ಬಳ್ಳಾರಿ, ಹೊಸಪೇಟೆ ಜಿಲ್ಲೆಗಳ AIKS ಕಾರ್ಯಕರ್ತರ ಸಂಘಟನಾ ಸಭೆ ಯನ್ನು ಇದೆ 2021ರ ನವೆಂಬರ್ 22 ರಂದು ಸೋಮವಾರ ಬೆಳಿಗ್ಗೆ 10.30 ಕ್ಕೆ ಹಗರಿಬೊಮ್ಮನಹಳ್ಳಿ ಎಪಿಎಂಸಿ ಯಾರ್ಡ್ ( ಕೃಷಿ ಮಾರುಕಟ್ಟೆ ) ಹತ್ತಿರದ ಕೃಷಿಕರ ಭವನದಲ್ಲಿ ಬಳ್ಳಾರಿ- ವಿಜಯನಗರ ಜಿಲ್ಲೆಗಳ ಅಖಿಲ ಭಾರತ ಕಿಸಾನ್ ಸಭಾ( aiks) ಕಾರ್ಯಕರ್ತರ ಪ್ರಥಮ ಸಂಘಟನಾ ಸಭೆಯನ್ನು ಆಯೋಜಿಸಲಾಗಿದೆ.
ಈ ಪ್ರಯುಕ್ತ ನಿಗದಿತ ಸಮಯಕ್ಕೆ ಸರಿಯಾಗಿ ಭಾಗವಹಿಸುವುದರೊಂದಿಗೆ ಪ್ರಸ್ತುತ ಸಂದರ್ಭದ ಕೃಷಿ ಸಂಬಂಧಿತ ಸಮಸ್ಯೆ ಮತ್ತು ಕೃಷಿಯ ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯಲಿದೆ.
ಪ್ರಥಮ ಸಂಘಟನೆ ಸಭೆಯನ್ನು ಖ್ಯಾತ ನ್ಯಾಯವಾದಿಗಳು ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ(ಸಿ ಪಿ ಐ )ದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಾಂಬ್ರೆಡ್ (ಕಾಂರೇಡ್ )ನಾಗಭೂಷಣರಾವ್ ಚಾಲನೆ ನೀಡಲಿದ್ದಾರೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶದಲ್ಲಿ ರೈತರು ಬಹುಸಂಖ್ಯೆಯಲ್ಲಿದ್ದರೂ ಒಗ್ಗಟ್ಟಿನ ಕೊರತೆಯಿಂದಾಗಿ ದುರ್ಬಲರೆಂಬ ತಪ್ಪು ಸಂದೇಶ ಜನರಲ್ಲಿ ಮನೆ ಮಾಡಿದೆ. ರೈತರೆಲ್ಲ ಒಂದಾಗಬೇಕು ಎಂಬ ಕಾಳಜಿ ಮತ್ತು ಜಾತಿ ಸೂತಕದಿಂದ ಹೊರಬಂದು ನಾವೆಲ್ಲರೂ ಭಾರತೀಯರು ಎಂಬ ಪರಿಕಲ್ಪನೆಯೊಂದಿಗೆ ಭ್ರಷ್ಟ ರಾಜಕೀಯ ಮತ್ತು ಅಧಿಕಾರಶಾಹಿಗಳಿಗೆ ತಕ್ಕ ಬುದ್ಧಿ ಕಲಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಹಾಗೂ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ರೈತರನ್ನು ಒಗ್ಗೂಡಿಸಿಕೊಂಡು ಪ್ರಬಲ ರೈತ ಸಂಘಟನೆ ಕಟ್ಟುವುದರ ಜೊತೆಗೆ ಧೀಮಂತ ನಾಯಕತ್ವ ನೀಡುವ ಸಫಲತೆ ಯೊಂದಿಗೆ ಸಹಕರಿಸಿ ಸಭೆಯನ್ನು ಯಶಸ್ವಿಗೊಳಿಸಲು ಈ ಮೂಲಕ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳಲಾಗಿದೆ ಎಂದು ಹೊಸಳ್ಳಿ ಮಲ್ಲೇಶ್ ಅಖಿಲ ಭಾರತ ಕಿಸಾನ್ ಮಹಾಸಭಾ (AIKS) ರಾಜ್ಯ ಉಪಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.å

Leave a Reply

Your email address will not be published. Required fields are marked *