ತಾಲೂಕಿನಲ್ಲಿ ಸಿಡಿಲು ಬಡಿದು ವಿವಿದೆಡೆ ಕುರಿಗಳು ,ಮೇಕೆ,ಹಸು,ನಾಯಿ ಸಾವು
1 min read![](https://vijayanagaraexpress.com/wp-content/uploads/2022/04/IMG-20220422-WA0021-1024x768.jpg)
ತಾಲೂಕಿನಲ್ಲಿ ಸಿಡಿಲು ಬಡಿದು ವಿವಿದೆಡೆ ಕುರಿಗಳು ,ಮೇಕೆ,ಹಸು,ನಾಯಿ ಸಾವು
ಹರಪನಹಳ್ಳಿ: ಏ-22 ತಾಲೂಕಿನ ತೆಲಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಳು , ಮತ್ತು ಕಂಚಿಕೇರಿ ಗ್ರಾಮದಲ್ಲಿ ಹಸು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ತೆಲಿಗಿ ಗ್ರಾಮದ ತಳವಾರ ರೇವಣಪ್ಪ ಎಂಬುವವರು ಕೆರೆಯಲ್ಲಿ ಕುರಿಗಳನ್ನು ಮೇಯಿಸಲು ಹೋಗಿದ್ದ ಸಮಯದಲ್ಲಿ ಶುಕ್ರವಾರ ಸಂಜೆ 6 ಘಂಟೆ ಸಮಯದಲ್ಲಿ ಸಿಡಿಲು ಬಡಿದು 12ಕುರಿಗಳು ,5ಮೇಕೆಗಳು, 1 ನಾಯಿ ಸಾವನ್ನಪ್ಪಿರುವ ಘಟನೆ ನಡೆದಿದೆ .ಅದೃಷ್ಟವಶಾತ್ ಕುರಿಗಾಹಿ ರೇವಣಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಇದರಿಂದ ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ಕುರಿಗಳು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಸ್ಥಳಕ್ಕೆ ತೆಲಿಗಿ ಹೋಬಳಿಯ ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಾದಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಂಚಿಕೇರೆ ಗ್ರಾಮದ ಜಿ .ಕರಿಬಸಪ್ಪ ತಂದೆ ಹನುಮಂತಪ್ಪ ಎಂಬುವವರಿಗೆ ಸೇರಿದ ಹಸು ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ ಸ್ಥಳಕ್ಕೆ ಗ್ರಾಮಲೆಕ್ಕಾದಿಕಾರಿ ರೇವಣಸಿದ್ದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಶೀಲ್ದಾರ್ ಪ್ರಭಾಕರ ಗೌಡ ತಿಳಿಸಿದ್ದಾರೆ.
ಅಣೆಮೇಗಳ ತಾಂಡಾದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಕಂಡಿಕೇರಿ ತಾಂಡದಲ್ಲಿಮಂಜ್ಯ ನಾಯ್ಕ್ ಎಂಬುವವರ ಮನೆಯ ತಗಡುಗಳು ಹಾರಿ ಹೋಗಿವೆ ಒಂದು ತಗಡು ಎತ್ತಿನ ಮೈಗೆ ನೆಟ್ಟು ಗಾಯಗಳಾಗಿವೆ ಎಂದು ವರಿದಿಯಾಗಿದೆ ಎಂದು ತಹಶೀಲ್ದಾರ್ ಪ್ರಭಾಕರ ಗೌಡ ತಿಳಿಸಿದ್ದಾರೆ.