ಆಸ್ಪತ್ರೆ ಸಿಬ್ಬಂದಿ ವಸತಿಗೃಹಗಳ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಜಿ ಕರುಣಾಕರ ರೆಡ್ಡಿ
1 min read![](https://vijayanagaraexpress.com/wp-content/uploads/2022/09/IMG-20220906-WA0032-1024x461.jpg)
ಆಸ್ಪತ್ರೆ ಸಿಬ್ಬಂದಿ ವಸತಿಗೃಹಗಳ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಜಿ ಕರುಣಾಕರ ರೆಡ್ಡಿ
ಹರಪನಹಳ್ಳಿ: ಸೆ-6,ತಾಲೂಕಿನ ಹಾರಕನಾಳು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಸಿಬ್ಬಂದಿಯ ನೂತನ ವಸತಿಗೃಹಗಳ ಕಾಮಗಾರಿಗೆ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಟಿ ಎ ಪಿ ಎಂ ಎಸ್ ಅಧ್ಯಕ್ಷ ಎಲ್ ಬಿ ಹಾಲೇಶ್ ನಾಯ್ಕ್, ವಿರೇಶ್ ನಾಯ್ಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಹಿನಾಬೀ ಭಾಷಾ ಸಾಬ್, ಉಪಾಧ್ಯಕ್ಷ ಬೋವಿ ನಾಗರಾಜ್,ಗ್ರಾಮ ಪಂಚಾಯಿತಿ ಸದಸ್ಯರಾದ ಬಸವಲಿಂಗನ ಗೌಡ್ರು,ಶಿವನಂದಪ್ಪ,ಒಮ್ಯಾಪ್ಪ, ಯುವ ಮುಖಂಡರಾದ ಜಗ್ಯಾನಾಯ್ಕ್,ಪಂಪಾನಾಯ್ಕ್,ಶಿವನ್ಯಾನಾಯ್ಕ್, ಬಿಜೆಪಿ ಮುಖಂಡರಾದ ವಿರೇಶ್ ಶೆಟ್ಟಿ, ಕೆಂಗಳ್ಳಿ ಪ್ರಕಾಶ್ ವಕೀಲರು, ಮಾಚಿಹಳ್ಳಿ ಮಲ್ಲೇಶ್,ಆರ್ ಲೋಕೇಶ್, ಪುರಸಭೆ ಮಾಜಿ ಸದಸ್ಯ ಮೆಹಬೂಬ್ ಸಾಬ್ , ದಾದಾಪುರದ ಶಿವಾನಂದ್, ಗುತ್ತಿಗೆದಾರ ಚಿದಾನಂದಪ್ಪ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.