Vijayanagara Express

Kannada News Portal

ಶಾಸಕ ಕರುಣಾಕರ ರೆಡ್ಡಿಯವರಿಂದ ಹಣ್ಣು ಬ್ರೆಡ್ ವಿತರಣೆ

1 min read

 

ಶಾಸಕ ಕರುಣಾಕರ ರೆಡ್ಡಿಯವರಿಂದ ಹಣ್ಣು ಬ್ರೆಡ್ ವಿತರಣೆ

ಹರಪನಹಳ್ಳಿ:ಸೆ-17, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ
ಶಾಸಕ ಕರುಣಾಕರ ರೆಡ್ಡಿಯವರು ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ ಮಾಡಿದರು.

ದೇಶದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಶಾಸಕ ಗಾಲಿ ಕರುಣಾಕರ ರೆಡ್ಡಿಯವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತಾರು ರೋಗಿಗಳಿಗೆ ಹಣ್ಣು ಬ್ರೆಡ್ ಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬಕ್ಕೆ ಶುಭವನ್ನು ಕೋರಿ ಮಾತಾನಾಡಿದ ಅವರು ರೋಗಿಗಳಿಗೆ ಬೇಗ ಗುಣಮುಖರಾಗಿ ಎಂದರಲ್ಲದೆ ವೈದ್ಯರು ಆಸ್ಪತ್ರೆಯಲ್ಲೇ ಔಷಧಿಗಳನ್ನು ವಿತರಿಸಿರಿ ರೋಗಿಗಳಿಗೆ ಹೊರಗಡೆ ಔಷಧಿಯನ್ನು ಬರೆಯಬೇಡಿ, ಹಾಗೂ ಅಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಡಾಕ್ಟರ್ ರಾಘವೇಂದ್ರ, ಡಾ. ಶಂಕರ್ ನಾಯ್ಕ್, ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಬಾಗಲಾರ್ ವೆಂಕಟೇಶ್ ,ದಾದಿಯರು ಡೀಲರ್ ಜೆ ನೌಕರರು ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್, ಬಿಜೆಪಿ ಕಾರ್ಯಕರ್ತರುಗಳಾದ ವೀರೇಶ್ ಶೆಟ್ಟಿ , ಮುತ್ತಿಗಿ ಎ.ಎನ್ ರೆವಣಸಿದ್ದಪ್ಪ ವಕೀಲರು,ಗೌರಿ ಹಳ್ಳಿ ಕೊಟ್ರೇಶ್, ಆರ್ ಲೋಕೇಶ್,ಕೊಟ್ರಯ್ಯ, ಶಿವಾನಂದ, ಕೆಂಗಳ್ಳಿ ಪ್ರಕಾಶ್ ವಕೀಲರು, ಮಹೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *