Vijayanagara Express

Kannada News Portal

ವೈಡಿ ಅಣ್ಣಪ್ಪ ರವರಿಂದ ರಸ್ತೆ ನಿರ್ಮಾಣ  : ಜನರಿಂದ ಅಭಿನಂದನೆ 

1 min read

ವೈಡಿ ಅಣ್ಣಪ್ಪ ರವರಿಂದ ರಸ್ತೆ ನಿರ್ಮಾಣ  : ಜನರಿಂದ ಅಭಿನಂದನೆ

 

ಹರಪನಹಳ್ಳಿ: ಫ್ರೆ – 8 , ತಾಲೂಕಿನ ಅಡವಿಹಳ್ಳಿ -ತಿಪ್ಪನಾಯಕನಹಳ್ಳಿ ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯು ಹಾಳುಬಿದ್ದು ಎರಡು ಬದಿಯಲ್ಲಿ ಜಂಗಲ್ ಬೆಳೆದು ರಸ್ತೆಗಳಲ್ಲಿ ಸಂಚರಿಸುವುದು ಬಾರಿ ಕಷ್ಟವಾಗಿತ್ತು ಆದುದರಿಂದ ತಿಪ್ಪನಾಯಕನಹಳ್ಳಿ, ಅಡವಿಹಳ್ಳಿ ಗ್ರಾಮದ ಮುಖಂಡರು ಹಿರಿಯರು ಯುವಕರು ಎಲ್ಲರೂ ಸೇರಿ ಬಳ್ಳಾರಿ ಸಂಸದ ವೈ ದೇವೇಂದ್ರಪ್ಪನವರ ಪುತ್ರರಾದ ವೈಡಿ ಅಣ್ಣಪ್ಪರವರನ್ನು ಸಂಪರ್ಕಿಸಿ ರಸ್ತೆಯ ಬಗ್ಗೆ ವಿವರಿಸಿ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು.


ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಗ್ರಾಮಸ್ಥರೆಲ್ಲರೂ ಸೇರಿ ವೈಡಿ ಅಣ್ಣಪ್ಪರವರಲ್ಲಿ ಮನವಿ ಮಾಡಿಕೊಂಡಾಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ವೈಡಿ ಅಣ್ಣಪ್ಪರವರು ತಮ್ಮ ಸ್ವಂತ ಖರ್ಚಿನಲ್ಲಿ ತಿಪ್ಪನಾಯಕನಹಳ್ಳಿ ಮತ್ತು ಅಡವಿಹಳ್ಳಿ ಗ್ರಾಮಕ್ಕೆ ರಸ್ತೆ ಬದಿಯಲ್ಲಿ ಇದ್ದಂತ ಜಂಗಲ್ ನ್ನು ಜೆಸಿಬಿ ಮೂಲಕ ತೆಗೆಸಿ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ದುರಸ್ತಿಗೊಳಿಸಿ ರೈತರು ಕಾರ್ಮಿಕರು ಎಲ್ಲ ಎರಡೂ ಊರಿನ ಗ್ರಾಮಸ್ಥರಿಗೆ ರಸ್ತೆಯಲ್ಲಿ ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸಿ ಕೊಟ್ಟಿರುತ್ತಾರೆ ಆ ಕಾರಣಕ್ಕಾಗಿ ಅಡವಿಹಳ್ಳಿ ತಿಪ್ಪನಾಯಕನಹಳ್ಳಿ ಗ್ರಾಮದ ಎಲ್ಲ ಮುಖಂಡರುಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ತಿಪ್ಪನಾಯಕನಹಳ್ಳಿಯ ಮುಖಂಡರಾದ ತಿಮ್ಮಪ್ಪ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನ ಕುಮಾರ್ ಕೊಟ್ರೆಶಪ್ಪ,
ಗ್ರಾಮ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ, ಸಿ ಆನಂದಪ್ಪ ,ಎಂ ಫಕೀರಪ್ಪ, ಹಾಲಪ್ಪ, ಸಿ .ಪರುಸಪ್ಪ, ಅಡಿವಿಹಳ್ಳಿ ದಕ್ಷಿಣ ಮೂರ್ತಿ ,ಬಸಪ್ಪ ,ಪೂಜಾರ್ ಮಂಜುನಾಥ್, ಪೂಜರ್ ರಾಜು ಬೆಣ್ಣಿಬಸಪ್ಪ ,ವಿಜಯಲಕ್ಷ್ಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *