Vijayanagara Express

Kannada News Portal

ಕಂಚಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜಿ.ವಿದ್ಯಾಶ್ರೀ ಬಸವರಾಜ್ ಅವಿರೋಧವಾಗಿ ಆಯ್ಕೆ

1 min read

ಕಂಚಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜಿ.ವಿದ್ಯಾಶ್ರೀ ಬಸವರಾಜ್ ಅವಿರೋಧವಾಗಿ ಆಯ್ಕೆ

 

ಹರಪನಹಳ್ಳಿ : ಜ – 31 , ತಾಲೂಕಿನ ಕಂಚಿಕೇರಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ವಿದ್ಯಾಶ್ರೀ ಬಸವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ರವರು ತಿಳಿಸಿದರು.
ಈ ವೇಳೆ ಮಾತನಾಡಿದ ಅವರು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ
ಈ ಹಿಂದೆ ಅಧ್ಯಕ್ಷೆಯಾಗಿದ್ದ ರೇಣುಕಾ ನಾಗರಾಜ್ ಅವರು ಸಲ್ಲಿಸಿದ ರಾಜೀನಾಮೆಯಿಂದ ತೆರವಾದ ಕಾರಣ ಈ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು , 24 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಜಿ.ವಿದ್ಯಾಶ್ರೀ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಭಾಗವಹಿದ್ದ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ, ರೆಡ್ಡಿ ಶಾಂತಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ ಬಸವರಾಜ್,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಗಡಿ ಹಾಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೋವಿ ಚಿನ್ನಪ್ಪ,
ಗಂಗನರಸಿ ನಾಗರಾಜ್, ಕೆ.ಬಿ ಕೊಟ್ರೇಶ್ ,ಕೆ.ಎಸ್ ನಿಜಗುಣ,ಸದ್ಯೋಜಾತಪ್ಪ, , ಎಂ.ಬಿ ಅಂಜಿನಪ್ಪ, ಈ ವೆಂಕಟೇಶ್, ಸುನಿಲ್ ಕುಮಾರ್ ಬಿದ್ರಿ, ಡಿ ಕೆಂಚಪ್ಪ, ಎಂ ಮಂಜುನಾಥ್, ಪಾಟೀಲ್ ಕೆಂಚನಗೌಡ, ಕೆ ಕೆಂಚಪ್ಪ,ಪಿ.ಕೊಟ್ರೇಶಪ್ಪ, ಎನ್.ಎಂ ಕೊಟ್ರಯ್ಯ, ಎಚ್.ರಾಜಪ್ಪ, , ನೇತ್ರಾವತಿ, ಎಂ.ಮಂಜುನಾಥ್, ಕೆ.ಭೀಮಪ್ಪ, ಎಚ್.ರಾಜಪ್ಪ, ಪರಸಪ್ಪ, ರೇವ್ಯನಾಯ್ಕ, ಪರಸಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಡಿ ,ಸಿಬ್ಬಂದಿ ಶ್ರೀನಿವಾಸ್,ಭರಮಣ್ಣ, ,ವಿಜಯಕುಮಾರ್ ಕೊಟ್ರೇಶ್ ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *