ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ ವಿ ರಾಮಚಂದ್ರ ಅವರಿಂದ ವಾಲ್ಮೀಕಿ ಜಾತ್ರಾಮಹೋತ್ಸವದ ಪೋಸ್ಟರ್ ಬಿಡುಗಡೆ .
1 min read![](https://vijayanagaraexpress.com/wp-content/uploads/2021/12/IMG_20211230_1718032-1024x549.jpg)
ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ ವಿ ರಾಮಚಂದ್ರ ಅವರಿಂದ ವಾಲ್ಮೀಕಿ ಜಾತ್ರಾಮಹೋತ್ಸವದ ಪೋಸ್ಟರ್ ಬಿಡುಗಡೆ .
ಹರಪನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿಸೆಂಬರ್ 30 ಗುರುವಾರ ಮಧ್ಯಾಹ್ನ ಫೆಬ್ರವರಿ ತಿಂಗಳಲ್ಲಿ 8 ಮತ್ತು 9ನೇ ತಾರೀಖಿನಂದು ಹರಿಹರ ತಾಲೂಕಿನ ವಾಲ್ಮೀಕಿ ಮಠದಲ್ಲಿ ಪ್ರತಿವರ್ಷದಂತೆ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವ ದ ಪೋಸ್ಟರನ್ನು ಜಗಳೂರಿನ ಶಾಸಕರೂ, ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷ ರಾದ ಎಸ್ ವಿ ರಾಮಚಂದ್ರಪ್ಪನವರು ಬಿಡುಗಡೆ ಮಾಡಿದರು .
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಕೋರಿಶೆಟ್ಟಿ ಉಚ್ಚೇಂಗೆಪ್ಪ, ಹರಪನಹಳ್ಳಿ ತಾಲೂಕು ವಾಲ್ಮೀಕಿ ಜಾತ್ರ ಸಮಿತಿ ಅಧ್ಯಕ್ಷರಾದ ಆಲದಹಳ್ಳಿ ಷಣ್ಮುಖಪ್ಪ, ಸಮಾಜದ ಮುಖಂಡರಾದ ಬಾಣದ ಅಂಜಿನಪ್ಪ, ಉಮಾಕಾಂತ್ ತೆಲಿಗಿ, ನಿವೃತ್ತ ಅಭಿಯಂತರರಾದ ಭೀಮಪ್ಪ, ನಿವೃತ್ತ ಶಿಕ್ಷಕ ಆನಂದಪ್ಪ, ತಾಲೂಕು ಪಂಚಯ್ತಿ ಮಾಜಿ ಸದಸ್ಯರಾದ ವಿಜಯಲಕ್ಷ್ಮಿ ಕಂಚಿಕೇರಿ, ಮಂಜುನಾಥ್, ಸಂಪತ್ ಕುಮಾರ್ ಕೆಂಚಪ್ಪ ಮುಂತಾದವರು ಉಪಸ್ಥಿತರಿದ್ದರು.